Monday, December 05, 2016

Thursday, August 18, 2011

Sunday, June 12, 2011

bramhins

ಚೆನ್ನೈ, ಜೂನ್ 12: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಸೋಲಿನ ಬುತ್ತಿ ಕಟ್ಟಿಕೊಟ್ಟವರು ಯಾರು? ಚುನಾವಣೆಯಲ್ಲಿ ಹೀನಾಯ ಸೋಲುಂಡು ಮಾಜಿ ಸಿಎಂ ಪಟ್ಟಕ್ಕಿಳಿದ ಎಂ ಕರುಣಾನಿಧಿ ಅವರ ದೃಷ್ಟಿಯಲ್ಲಿ ಮೈತ್ರಿಕೂಟ ಸೋಲುಣ್ಣುವಂತೆ ಮಾಡಿದ್ದು ಬ್ರಾಹ್ಮಣರಂತೆ! ಹಾಗೆ ನೋಡಿದರೆ ಕರುಣಾನಿಧಿ ಸಾಹೇಬರು ಬ್ರಾಹ್ಮಣರನ್ನು ದೂಷಿಸುತ್ತಿರುವುದು ಇದೇ ಮೊದಲಲ್ಲ.

ಕಳೆದ ವಾರ ನಡೆದ ಪಕ್ಷದ ತುರ್ತು ಸಭೆಯಲ್ಲಿ ಹಿರಿಯಜ್ಜ ಕರುಣಾನಿಧಿ ಗರಂ ಆಗಿದ್ದರು. ಆ ನಂತರ, ಸುದ್ದಿಗೋಷ್ಠಿಯಲ್ಲೂ ನಿಗಿನಿಗಿ ಕೆಂಡದಂತಿದ್ದರು. ಪತ್ರಕರ್ತರೊಬ್ಬರು, ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ 2ಜಿ ಹಗರಣ ಕಾರಣವೇ ಎಂಬ ಪ್ರಶ್ನೆ ಎಸೆದರು.

ಪ್ರಶ್ನೆ ಕೇಳುತ್ತಲೇ ಮತ್ತಷ್ಟು ಕೆರಳಿದ ಡಿಎಂಕೆ ನಾಯಕ, ಪಕ್ಷಕ್ಕೆ ಸೋಲು ತಂದಿದ್ದು 2ಜಿ ಹಗರಣವಲ್ಲ, ಕೆಲವೊಂದು ಬ್ರಾಹ್ಮಣರ ಸಂಚಿನಿಂದಾಗಿ ನಾವು ಈ ಸ್ಥಿತಿ ತಲುಪಬೇಕಾಯಿತು ಎಂದು ಕೋಪದಿಂದ ಉತ್ತರ ನೀಡಿದರು.

ಈ ವೇಳೆ ದೆಹಲಿಯಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆಯಂತಲ್ಲ ಎಂಬ ಮತ್ತೂಂದು ಪ್ರಶ್ನೆ ಕರುಣಾನಿಧಿ ಅವರತ್ತ ತೂರಿಬಂತು. ಈ ಪ್ರಶ್ನೆಗೂ ರೇಗಿದ ಮಾಜಿ ಸಿಎಂ, ಹೀಗೇ ಬಿಟ್ಟರೆ ... ಬಾಬಾ ರಾಮದೇವ್‌ ಜತೆಗೂ ನಾನು ಮೈತ್ರಿ ಮಾತುಕತೆ ನಡೆಸುತ್ತೇನೆ ಎನ್ನುತ್ತೀರಿ ಎಂದು ಮರುಬಾಣ ಎಸೆದರು.

ಯುಪಿಎ ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂಬ ಮತ್ತೂಂದು ಪ್ರಶ್ನೆಗೆ, ರಸ್ತೆಯಲ್ಲಿ ಸುತ್ತಾಡಿಕೊಂಡಿರುವವರಿಗೆ ನನ್ನ ಸ್ವಾಭಿಮಾನದ ಬಗ್ಗೆ ಉತ್ತರ ನೀಡಬೇಕಾದ್ದಿಲ್ಲ, ನನ್ನ ಸ್ವಾಭಿಮಾನ ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ಮತ್ತೂಬ್ಬ ಪತ್ರಕರ್ತರು, 2ಜಿ ಪ್ರಕರಣದಲ್ಲಿ ಕಾಂಗ್ರೆಸ್‌ ನಿಮಗೆ ಸಹಾಯ ಮಾಡಿಲ್ಲ ಎಂಬ ವಿಷಾದವಿದೆಯೇ ಎಂದು ಪ್ರಶ್ನಿಸಿದರು. ಖಂಡಿತಾ ವಿಷಾದವಿಲ್ಲ, ಆದರೆ ವಿಷಾದ ಮೂಡಿಸಲು ನೀವು ಬಹಳ ಪ್ರಯತ್ನ ಪಡುತ್ತಿದ್ದೀರಿ ಎಂದು ಮತ್ತೆ ಪತ್ರಕರ್ತರ ಮೇಲೆ ಹರಿಹಾಯ್ದರು. ಹೀಗೆ ಇಡೀ ಸುದ್ದಿಗೋಷ್ಠಿಯನ್ನು ಪತ್ರಕರ್ತರ ಮೇಲೆ ಹರಿಹಾಯಲೇ ಕರುಣಾನಿಧಿ ಬಳಸಿಕೊಂಡರು

Thursday, April 15, 2010

Hero of the day: man saves the lives of over 2 million, 'Man with the golden arm' saves 2million babies in half a century of donating rare type of blood:

James Harrison, 74, has an antibody in his plasma that stops babies dying from Rhesus disease, a form of severe anaemia.



It was found his plasma could treat the condition and since then it has been given to hundreds of thousands of women.



Mr Harrison has been giving blood every few weeks since he was 18 years old and has now racked up a total of 984 donations.



It is estimated he has helped save 2.2 million babies so far.



He said: 'I've never thought about stopping. Never.' He made a pledge to be a donor aged 14 after undergoing major chest surgery in which he needed 13 litres of blood.

Sunday, March 28, 2010

ಇಂಟರ್‌ನೆಟ್ ಮೂಲಭೂತ ಹಕ್ಕು


ಭಾರತ ಸೇರಿದಂತೆ ವಿಶ್ವದ 26 ದೇಶಗಳಲ್ಲಿನ ಇಂಟರ್‌ನೆಟ್ ಬಳಸುವ ಪ್ರತಿ ಐದು ಮಂದಿಯಲ್ಲಿ ನಾಲ್ವರು, ಇಂಟರ್‌ನೆಟ್ ಸೌಲಭ್ಯ ಹೊಂದುವುದು ಮತ್ತು ಬಳಸುವುದು ‘ಮೂಲಭೂತ ಹಕ್ಕು’ ಎಂದು ಪ್ರತಿಪಾದಿಸಿದ್ದಾರೆ.
27 ಸಾವಿರ ವಯಸ್ಕರು ಪಾಲ್ಗೊಂಡಿದ್ದ ಸಮೀಕ್ಷೆಯಲ್ಲಿ ಈ ಸಂಗತಿ ತಿಳಿದು ಬಂದಿದೆ. ಸಂವಹನದ ಹಕ್ಕನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ. ತಿಳಿವಳಿಕೆ ಹೆಚ್ಚಿಸುವಲ್ಲಿ ಮತ್ತು ಜ್ಞಾನ ಪ್ರಧಾನವಾದ ಮಾಹಿತಿ ಆಧಾರಿತ ಸಮುದಾಯದ ಬೆಳವಣಿಗೆಯಲ್ಲಿ ಇಂಟರ್‌ನೆಟ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಬಿಬಿಸಿ ವರ್ಲ್ಡ್ ಸರ್ವಿಸ್‌ಗೆ ಗ್ಲೋಬ್‌ಸ್ಕ್ಯಾನ್ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಸಮೀಕ್ಷೆಯಲ್ಲಿ ಭಾಗಿಯಾದ ಶೇ 87ರಷ್ಟು ಜನರು, ಇಂಟರ್‌ನೆಟ್ ಸೌಲಭ್ಯ ಒದಗಿಸುವುದು ಎಲ್ಲರ ಮೂಲಭೂತ ಹಕ್ಕು ಆಗಿದೆ ಎಂದು ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಮೆಕ್ಸಿಕೊ, ಬ್ರೆಜಿಲ್ ಮತ್ತು ಟರ್ಕಿ ದೇಶಗಳು ಈ ಆಲೋಚನೆಯನ್ನು ಬಲವಾಗಿ ಪ್ರತಿಪಾದಿಸಿವೆ.